ಭಕ್ತ

ಪ್ರಾರ್ಥನೆ ಗೈವರು ದೇವರಲಿ
ತಪ್ಪು ಮಾಡುವ ಮುನ್ನಾ ಕ್ಷಣ
ನೆನೆಯುವರು ನಿನ್ನ ಮನದಲ್ಲಿ
ಕಾಪಾಡು ನನ್ನನು ಅನುದಿನ ಎಂದು.

ಪ್ರಾರ್ಥನೆ ಗೈವರು ದೇವರಲಿ
ಮಾಡಿದ ತಪ್ಪಿಗೆ ಕ್ಷಮೆಕೋರಿ
ನೆನದು ಬೇಡುವರು ಅನುಕ್ಷಣ
ಮನ್ನಿಸಿಬಿಡು ನನ್ನನ್ನ

ಹರಕೆಯ ಹೊರುವರು ನಿನ್ನಲ್ಲಿ
ಕಾಡಿಬೇಡುವರು ವರವನು ಕೇಳಿ
ಅಂದುಕೊಂಡಂತೆ ನೆನೆದರೇನೆ
ಮುಂದಿಡುವರು ಹರಕೆಯ ಸನ್ನ

ಮಾಡುವರು ಶಪಥ ನಿನ್ನಲ್ಲಿ
ಆಮಿಷ ತೋರುವ ತರದಲಿ
ಕಾರ್ಯ ಸಿದ್ಧಿ ಯಾದರೇನೆ ನಿನಗೆ
ಕೊಡುವರು ಚಿನ್ನಾಭರಣ

ಸ್ವಾರ್ಥದಿ ಜನ ಬೇಡುವರು ದಿನ
ಬೇಡುವರೆಲ್ಲರು ತಮ್ಮದೆ ಒಳಿತಿಗೆ
ಬಲಿ ಕೊಡುವರು ಮೂಕ ಪ್ರಾಣಿಗಳ
ರಕ್ಕಸ ಮುಖ ತೋರುವ

ದೇವರೆ ದೇವರೆ ಎನ್ನುವರು ದಿನ
ತಮಗಾಗಿ ತಮ್ಮ ಒಳಿತಿಗಾಗಿ
ನಿನಗಾಗಿ ಪ್ರಾರ್ಥಿಸುವವರು ನಾನಂತು ಕಾಣೆ
ಇದು ಸತ್ಯ ದೇವ ನಿನ್ನಾಣೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ ಧ್ಯಾನ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೩

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys